ಆ.31 ರಂದು ಕ್ಯಾನ್ಸರ್ ಅರಿವು ಜಾಗೃತಿ ಕಾರ್ಯಕ್ರಮ 


ಗೊಣಿಕೊಪ್ಪ (TOC ಕೊಡಗು) : ಗೋಣಿಕೊಪ್ಪ ಕಾವೇರಿ ಶಿಕ್ಷಣ ಸಂಸ್ಥೆ, ಸುವರ್ಣ ಕಾವೇರಿ ಸಾಂತ್ವನ ಯೋಜನೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೆನೆಪೊಯ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ, ಆಗಸ್ಟ್ 31 ರಂದು 10 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಕ್ಯಾನ್ಸರ್ ಅರಿವು ಜಾಗೃತಿ ಕಾರ್ಯಕ್ರಮ ಮತ್ತು ಮೂಲಭೂತ ಜೀವನ ಆಧಾರ ಮತ್ತು ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ನಡೆಯಲಿದೆ. ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಡಾ.ಎ.ಸಿ.ಗಣಪತಿ, ರಾಜ್ಯ ಎನ್‍ಎಸ್‍ಎಸ್ ಅಧಿಕಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಾಜಿ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಯೆಕ್ಕಾರ್, ರಾಜ್ಯ ಎನ್‍ಎಸ್‍ಎಸ್ ಅನುಷ್ಠಾನ ಅಧಿಕಾರಿ, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಸೆಲ್ ಡಾ.ಪೂರ್ಣಿಮ ಜೋಗಿ, ಕಾರ್ಯಕ್ರಮ ಸಂಯೋಜಕರಾದ ಎನ್‍ಎಸ್‍ಎಸ್ ಯೆನೆಪೊಯ ವಿಶ್ವವಿದ್ಯಾಲಯ, ಸಹಾಯಕ ಪ್ರಾಧ್ಯಾಪಕರಾದ ಡಾ.ಅಶ್ವಿನಿ ಎಸ್.ಶೆಟ್ಟಿ ಇತರರು ಪಾಲ್ಗೊಳ್ಳಲಿದ್ದಾರೆ.
Previous Post
Next Post

0 Post a Comment: