ಉಪ್ಪಿನಂಗಡಿ : ಜ್ಯುವಲ್ಲರಿಯೊಂದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು


ಮಂಗಳೂರು: ಉಪ್ಪಿನಂಗಡಿಯಲ್ಲಿರುವ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
 ಇಲ್ಲಿನ ಆರ್.ಕೆ. ಜುವೆಲ್ಲರ್ಸ್‌ ನಿಂದ ಈ ಕಳ್ಳತನ ನಡೆದಿದೆ. ಕಳೆದ ರಾತ್ರಿ ಈ ದರೋಡೆ ನಡೆದಿದೆ. ಚಿನ್ನದ ಅಂಗಡಿಯ ಶೆಟರ್ ನ ಬೀಗವನ್ನು ಗ್ಯಾಸ್ ಕಟರ್ ಮೂಲಕ ತುಂಡು ಮಾಡಲಾಗಿದೆ. ಬಳಿಕ ಒಳನುಗ್ಗಿರುವ ಕಳ್ಳರು ಅಂದಾಜು ಸುಮಾರು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳವಾಗಿರುವ ಒಟ್ಟು ಸೊತ್ತುಗಳ ವೌಲ್ಯ ಇನ್ನು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Previous Post
Next Post

0 Post a Comment: