ಮಂಗಳೂರು ಜುಲೈ 31 :- ಬಜಾಲ್ ಕಾಂಗ್ರೇಸ್ ವಾರ್ಡ್ ಸಮಿತಿ ಹಾಗೂ ಬಜಾಲ್ ಯೂತ್ ಕಾಂಗ್ರೇಸ್ ಸಮಿತಿ ಜಂಟಿ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಭಾಗಿತ್ವದಲ್ಲಿ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಕಾರದೊಂದಿಗೆ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಬಜಾಲ್ ಪಡ್ಪುವಿನಲ್ಲಿ ಆದಿತ್ಯವಾರ ನಡೆಯಿತು. ಕಾರ್ಯಕ್ರಮದ ಉಧ್ಘಾಟನೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ ಆರ್ ಲೋಬೋ ನೆರವೇರಿಸಿ ಮಾತನಾಡಿದ ಅವರು ಆಧುನಿಕ ಜಂಜಾಟಕ್ಕೆ ಸಿಲುಕಿಕೊಂಡಿರುವ ಇಂದಿನ ಯುವಜನತೆ ಬಿಡುವು ಮಾಡಿಕೊಂಡು ಇಂತಹ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹಾಗೂ ಆರೋಗ್ಯ ಜಾಗೃತಿ ಮೂಡಿಸುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು... ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಜೆ ಅಬ್ದುಲ್ ಸಲೀಂ ಅವರು ಮಾತನಾಡಿ ರಕ್ತಕ್ಕೆ ಪರ್ಯಾಯ ರಕ್ತ ಮಾತ್ರವಾಗಿದೆ ಪ್ರಸಕ್ತ ಹಲವಾರು ಯುವಕರು ಸ್ವಯಂ
ಪ್ರೇರಿತವಾಗಿ ರಕ್ತದಾನ ಮೂಡಿಸುವುದಲ್ಲದೇ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ನಿಜವಾಗಿಯೂ ಮೆಚ್ಚಲೇಬೇಕಾಗಿದೆ ಎಂದು ತಿಳಿಸಿದರು... ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಬಿರದ ಮೇಲುಸ್ತುವಾರಿ ಹಾಗೂ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಕೆ ಇ ಅಶ್ರಫ್ ,ಯುವ ಕಾಂಗ್ರೇಸ್ ಮಂಗಳೂರು ದಕ್ಷಿಣ ಅಧ್ಯಕ್ಷರಾದ ಮೆರಿಲ್ ರೇಗೋ ,ಕಾಂಗ್ರೇಸ್ ಮುಖಂಡರುಗಳಾದ ರಮಾನಂದ ಪೂಜಾರಿ,ಆನಂದ ರಾವ್ ,ಭರತೇಶ್ ಅಮೀನ್,ಅಬೂಬಕ್ಕರ್ ಜೆಲ್ಲಿಗುಡ್ಡೆ,ಪ್ರದೀಪ್ ಕುಮಾರ್ ಜಲ್ಲಿಗುಡ್ಡೆ ಮುಸ್ತಫಾ ಬಜಾಲ್ ,ಅಕ್ಬರ್ ಶರೀಫ್ ಕಲ್ಲಕಟ್ಟೆ,ಸಮೀರ್ ಕಲ್ಲಕಟ್ಟೆ ,ಆಸಿಫ್ ಬಜಾಲ್ ,ಬದ್ರುದ್ದೀನ್ ಬಜಾಲ್,ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಅಧ್ಯಕ್ಷರಾದ ಜನಾಬ್ ಸಿದ್ದೀಕ್ ಮಂಜೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು... ಶಿಬಿರದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ತಂಡದ ಪ್ರಧಾನ ಕಾರ್ಯದರ್ಶಿಯಾದ ನವಾಝ್ ಕಲ್ಲರಕೋಡಿ,ತಂಡದ ಕಾರ್ಯ ನಿರ್ವಾಹಕರುಗಳಾದ ಸಲಾಂ ಚೊಂಬುಗುಡ್ಡೆ,ಮುನೀರ್ ಚೊಂಬುಗುಡ್ಡೆ,ಫಾರೂಕ್ ಬಿಗ್ ಗ್ಯಾರೇಜ್,ಮನ್ಸೂರ್ ಸೂರಜ್ ಕಲ್ಲಡ್ಕ,ಶಾಹುಲ್ ಹಮೀದ್ ಕಾಶಿಪಟ್ನಾ,ಮಾಸ್ಟರ್ ಫಾಝಿಲ್ ಹಾಗೂ ರಝಾಕ್ ಸಾಲ್ಮರ ಸಹಕರಿಸಿದರು.. ಕಾರ್ಯಕ್ರಮದ ನಂತರ ಊರಿನ ನಾಗರಿಕರು ಉಚಿತ ವೈದ್ಯಕೀಯ ಶಿಬಿರದ ಫಲಾನುಭವಿಗಳಾದರು ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಯಶಸ್ವಿಯಾಗಿ ಭಾಗವಹಿಸಿದರು.. ಮಂಗಳೂರು ದಕ್ಷಿಣ ಕಾಂಗ್ರೇಸ್ ಕಾರ್ಯದರ್ಶಿ ಅಶ್ರಫ್ ಕೆ ಇ ಸ್ವಾಗತಿಸಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡದ ಕಾರ್ಯನಿರ್ವಾಹಕರಾದ ದಾವೂದ್ ಬಜಾಲ್ ವಂದಿಸಿದರು...



0 Post a Comment: