ಆರ್ಟಿಕಲ್ 370 ರದ್ದು: ಕಾಶ್ಮೀರಕ್ಕಿಲ್ಲ ವಿಶೇಷ ಸ್ಥಾನಮಾನ. 


ಟೈಮ್ಸ್ ಆಫ್ ಕೂರ್ಗ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ರಾತ್ರಿಯಿಂದ ನಡೆಯುತ್ತಿರುವ ಬೆಳವಣಿಗೆಗಳು ದೇಶದಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯ ಸೇನಾಪಡೆ ನಿಯೋಜನೆ ಮಾಡಲಾಗಿದೆ. ಮೊಬೈಲ್​ ಇಂಟರ್ನೆಟ್​ ಸೇವೆ ಭಾಗಶಃ ಸ್ಥಗಿತಗೊಂಡಿದೆ. ಹಾಗೇ ರಾಜಕೀಯ ನಾಯಕರಾದ ಓಮರ್​ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿಯನ್ನ ಗೃಹಬಂಧನಲ್ಲಿರಿಸಲಾಗಿದೆ. ಈ ಮಧ್ಯೆ ಇಂದು ಬೆಳಗ್ಗೆ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ. ಗೃಹ ಸಚಿವ ಅಮಿತ್​ ಶಾ ಇಂದು ರಾಜ್ಯಸಭೆಯಲ್ಲಿ ಜಮ್ಮು ಕಾಶ್ಮೀರ ವಿಷಯವಾಗಿ ಮಸೂದೆ ಮಂಡಿಸಿದ್ದಾರೆ.
Previous Post
Next Post

0 Post a Comment: