ಗಡಿನಾಡಿನಲ್ಲಿ ಯಶಸ್ವಿ ರಕ್ತದಾನ ಶಿಬಿರ


ಮಂಗಳೂರು : ಕುಂಬಳೆ ಆಗಸ್ಟ್ 20 ಎಸ್ ಅಜಿತ್, ಮನೀಶ್ ಸ್ಮರಣಾರ್ಥ ಸಿ.ಪಿ.ಎಂ ಶಾಂತಿಪಲ್ಲ, ನಾಟುಪೊಲೀಮ ಕಲಾವೇದಿಕೆ, ಬ್ಲಡ್ ಹೆಲ್ತ್ ಲೈನ್ ಕೇರಳ,ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಆಗಸ್ಟ್ 18 ಆದಿತ್ಯವಾರದಂದು ಕುಂಬಳೆ ಅಕಾಡೆಮಿ ಕಾಲೇಜ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಒಟ್ಟು 60 ಯೂನಿಟ್ ರಕ್ತ ಸಂಗ್ರಹಿಸಲಾಯಿತು.ರಕ್ತದಾನ ಮಾಡಿದ ದಾನಿಗಳಿಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ)ತಂಡದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಿ.ಪಿ.ಎಂ.ಸ್ಥಳೀಯ ಕಾರ್ಯದರ್ಶಿ ರಮೇಶ್ ಬಾಬು,ಕೊಗ್ಗು ಕುಂಬಳೆ, ಸಿ.ಪಿ.ಎಂ. ಬ್ರಾಂಚ್ ಕಾರ್ಯದರ್ಶಿ ಇರ್ಷಾದ್ ಚಾಕೊ, ಮಿಷಲ್ ರಹ್ಮಾನ್, ಬ್ಲಡ್ ಹೆಲ್ತ್ ಲೈನ್ ಚೇರ್ಮಾನ್ ಸಯ್ಯದ್ ಮುಹಮ್ಮದ್ ಮುತ್ತು ತಂಗಲ್ ಆತೂರ್,ಅಬ್ದುಲ್ ರಶೀದ್ ಸಖಾಫಿ ಕಣ್ಣೂರು, ಬ್ಲಡ್ ಹೆಲ್ತ್ ಲೈನ್ ಕಾರ್ಯಕರ್ತರಾದ ಕರೀಮ್ ಮಾಸ್ಟರ್ ವಿಟ್ಲ, ಸಲೀಂ ಕಲ್ಲಕಟ್ಟ, ಹಾರಿಸ್ ತಾಯಿವಲಪ್ಪು,ಬ್ಲಡ್ ಡೋನರ್ಸ್ ಮಂಗಳೂರು(ರಿ)ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ,ಕಾರ್ಯದರ್ಶಿ ನವಾಝ್ ಕಲ್ಲರಕೊಡಿ,ಸಲಾಮ್ ಚೆಂಬುಗುಡ್ಡೆ,ಫಯಾಝ್ ಮಾಡೂರು ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Previous Post
Next Post

0 Post a Comment: