SYS ಸದಸ್ಯತ್ವ ಅಭಿಯಾನಕ್ಕೆ ಕೊಳಕೇರಿಯಲ್ಲಿ ಜಿಲ್ಲಾಮಟ್ಟದ ಚಾಲನೆ


ಮಡಿಕೇರಿ : ಸುನ್ನಿ ಯುವಜನ ಸಂಘ (SYS) ಇದರ ಸದಸ್ಯತ್ವ ಅಭಿಯಾನವನ್ನು ಜಿಲ್ಲಾಮಟ್ಟದಲ್ಲಿ ಕೊಳಕೇರಿಯಲ್ಲಿ ಉದ್ಘಾಟಿಸಲಾಯಿತು ಹಾಗೂ SYS ಜಿಲ್ಲಾ ಸಮಿತಿ ವತಿಯಿಂದ ಬಡಕುಟುಂಬಕ್ಕೆ ನಿರ್ಮಿಸಿದ ದಾರುಲ್ ಕೈರ್ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು , ಅಬೂ ಸುಫ್ಯಾನ್ ಸಖಾಫಿ, ಸುನ್ನಿ ಕೊರ್ಡಿನೇಶನ್ ಕಾರ್ಯದರ್ಶಿ ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ನ, ರಾಜ್ಯ SYS ನಾಯಕರಾದ ಅಬ್ದುರ್ರಶೀದ್ ಝೈನಿ, ಹಕೀಂ ಕೊಡ್ಲಿಪೇಟೆ, ಉಮರ್ ಸಖಾಫಿ ಎಡಪ್ಪಾಲಂ.ಹಾಗೂ ಜಿಲ್ಲಾ ಎಸ್ ವೈ ಎಸ್ ನಾಯಕರು ಕಾರ್ಯಕರ್ತರು ಭಾಗವಹಿಸಿದ್ದರು.

Previous Post
Next Post

0 Post a Comment: