✍ ಪರಪ್ಪು ಸಖಾಫಿ
ಭಾರತ ದೇಶದಲ್ಲಿ ಸರಿಯಾಗಿ ಜೀವನ ಮಾಡುವ ಯರೂ ಯಾರಿಗೂ ಹೆದರಬೇಕಾಗಿಲ್ಲ ಕಾರಣ ಇಲ್ಲಿ ಎಲ್ಲಾ ಜಾತಿ.ಭಾಷೆ. ವೇಷ.ವರ್ಣ.ವರ್ಗ ಪಂಗಡದವರಿದ್ದಾರೆ ಅವರೆಲ್ಲರೊಂದಿಗೂ ಯಥಾರ್ಥ ಮುಸ್ಲಿಮರಾದ ನಾವು ಪ್ರವಾದಿಯವರು ಕಲಿಸಿದ ಹಾಗೆ ಸ್ನೇಹದಿಂದ ,ಸಹಬಾಳ್ವೆ ಯಿಂದ ಜೀವನ ಮಾಡುತ್ತಾ ಇದ್ದೇವೆ.ಭಾರತದ ಸಂವಿಧಾನದ ಅಡಿಯಲ್ಲಿ ಜೀವಿಸುವುದು ಪ್ರತಿಯೊಂದು ಭಾರತೀಯನಿಗೂ ಕಡ್ಡಾಯ.
ಇತ್ತೀಚಿಗೆ ಅಮಾಯಕರಾದ ಒಬ್ಬರಿಗೆ ಉಗ್ರರ ಪಟ್ಟ ಕಟ್ಟಿ ಹೆದರಿಸುವುದು ಬೆದರಿಸುವುದು ಮಾಧ್ಯಮಗಳಲ್ಲಿ ಕೇಳಲು ಸಾದ್ಯವಾಯಿತು .ಸುಳ್ಳು ಆರೋಪಿಸಿ ,ಸರಿಯಾದ ಪುರಾವೆಯಿಲ್ಲದೆ ಯಾವ ಮನುಷ್ಯನಿಗೂ ಮಾನಸಿಕ ಹಾಗೂ ಶಾರೀರಿಕ ಹಿಂಸೆ ಕೊಡುವವರು ಅವರ ಧರ್ಮದ ಶತ್ರುಗಳಾಗಿದ್ದಾರೆ.ಆದುದರಿಂದ ಅಂತಹ ಅಕ್ರಮಗಳಿಗೆ ಭಾರತ ದೇಶದ ಪ್ರೀತಿಯನ್ನು ಹಿಡಿದು ನಾವು ಖಂಡಿಸುತ್ತೇವೆ.ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲೇ ಬೇಕು ಆದರೂ ಸರಿಯಾದ ಪುರಾವೆ ಬೇಕೇ ಬೇಕು

0 Post a Comment: