ರಸ್ತೆ ಅಪಘಾತ : ಹಿರಿಯ ಧಾರ್ಮಿಕ ವಿದ್ವಾಂಸ ಉಸ್ತಾದ್ ಯೂಸುಫ್ ಹಾಜಿ ಮೃತ್ಯು


ಟೈಮ್ಸ್ ಆಫ್ ಕೂರ್ಗ್ 
ಮಂಗಳೂರು: ಇಂದು ಬಿ.ಸಿ ರೋಡಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಹಿರಿಯ ಧಾರ್ಮಿಕ ವಿದ್ವಾಂಸ ಅಡ್ಡೂರಿನ ಯೂಸುಫ್ ಹಾಜಿ ಉಸ್ತಾದ್ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾರೆ. ಇವರು ಇಂದು ಸಂಜೆ ವೇಳೆ ರಸ್ತೆ ದಾಟುತ್ತಿದ್ದ ಸಂಧರ್ಭ ಕೈಕಂಬದ ಕಡೆಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ವಿದ್ವಾಂಸರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರುವಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಮರಣ ಹೊಂದಿದ್ದಾರೆ
Previous Post
Next Post

0 Post a Comment: