ಕೊಡಗು ಸಂತ್ರಸ್ತರಿಗೆ ಎನ್.ಸಿ.ಟಿ‌ ದಮಾಮ್ ವತಿಯಿಂದ ಉಚಿತ ಆಹಾರ ಧಾನ್ಯ ವಿತರಣೆ: 


ಚೆಟ್ಟಳ್ಳಿ: ಅರಬ್ ದೇಶದ ದಮಾಮ್ ಎನ್.ಸಿ ಟಿ ವತಿಯಿಂದ ಕೊಡಗು ಜಿಲ್ಲೆಯಲ್ಲಿನ ಮಹಾ ಮಳೆಗೆ ತುತ್ತಾಗಿ ಮನೆಗಳನ್ನು ಕಳೆದುಕೊಂಡ ಕೊಂಡಂಗೇರಿಯ ಸಂತ್ರಸ್ತರಿಗೆ ಆಹಾರ ಧಾನ್ಯವನ್ನು ವಿತರಿಸಲಾಯಿತು. ಕೊಡಗು ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ಸದಾ ಮುಂದಿರುವ ಜಿಲ್ಲೆಯವರಾದ ಪ್ರಸ್ತುತ ದಮಾಮ್ ನಲ್ಲಿ ಉದ್ಯೋಗದಲ್ಲಿರುವ ಕಂಡಕರೆಯ ಆದಂ, ಅಬ್ಬಂಟ್ಟಿಯ ನಿಸಾಮ್ ಹಾಗೂ ಕೊಟ್ಟಮುಡಿ ಸಮದ್ ಅವರು ಧಾನಿಗಳಿಂದ ಹಣ ಸಂಗ್ರಹಿಸಿ ಸಂತ್ರಸ್ತರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದರು. ಆಹಾರ ಧಾನ್ಯ ವಿತರಣೆ ಸಂದರ್ಭ ಎನ್.ಸಿ.ಟಿ ಪ್ರತಿನಿಧಿಯಾಗಿ ಉನೈಸ್, ಇಸ್ಮಾಯಿಲ್ ಕಂಡಕರೆ ಹಾಗೂ ಕೊಂಡಂಗೇರಿ ಅಂದಾಯಿ ಮತ್ತಿತರರು ಇದ್ದರು.

Previous Post
Next Post

0 Post a Comment: