ಹುಣಸೂರಿನಲ್ಲಿ ಭಾರಿ ಮಳೆ : ತುಂಬಿ ಹರಿಯುತ್ತಿರುವ ಲಕ್ಷ್ಮಣತೀರ್ಥ ನದಿ : ಕೆಲವೆಡೆ ಜಲಾವೃತ


ವರದಿ : ಮಾಷಿಂ ಶರೀಫ್. ಹುಣಸೂರು.
ಹುಣಸೂರು : ರಾಜ್ಯದಲ್ಲಿ 4 -5 ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ ಕೊಡಗಿನಲ್ಲಿ ಮಳೆಯ ಆರ್ಭಟ ಜಾಸ್ತಿ ಯಾಗಿದ್ದು ಗುಡ್ಡ ಕುಸಿತದಿಂದ ರಸ್ತೆಗಳು ಬಂದ್ ಆಗಿವೆ. ಕೊಡಗಿನ ಅಂಚಿನಲ್ಲರುವ ಹುಣಸೂರು ಕೂಡ ಅತಿ ಮಳೆಯಿಂದ ಕೂಡಿದ್ದು ಲಕ್ಷ್ಮಣ ತೀರ್ಥ ನಧಿ ತನ್ನ ಒಡಲನ್ನು ತುಂಬಿ ಕೊಂಡು ಹರಿಯುತ್ತಿದೇ ಹನುಗೂಡು ಭಾಗದಲ್ಲಿ ಲಕ್ಷ್ಮಣ ತೀರ್ಥ ನಧಿ ತುಂಬಿ ಹರಿಯುತ್ತಿದ್ದು ಸೇತುವೆಗಳು ಭಾಗಸಾ ಮುಳುಗಿ ಹೋಗಿದ್ದರಿಂದ ಸಂಚಾರ ಅಸ್ತ ವ್ಯಸ್ತ ಗೊಂಡಿದೆ. ಹುಣಸೂರು ಪಟ್ಟಣದ ಹಳೆಯ ಸೇತುವೆಯಲ್ಲಿ ಸಂಚಾರವನ್ನು ಸ್ಥಗಿತ ಗೊಳಿಸಲಾಗಿದೆ. ಲಕ್ಷ್ಮಣ ತೀರ್ಥ ನಧಿಯಲ್ಲಿ ಭಾರಿ ನೀರು ಹರಿಯುತ್ತಿರುವುದರಿಂದ 

ಪಂಪ್ ಹೌಸ್ ಹಾಗೂ ಭ್ರಾಹ್ಮಣರ ಬೀದಿ ನೀರಿನಿಂದ ಜಲಾವೃತಗೊಂಡಿದೆ. ಸಿಂಗರಮಾರನ ಹಳ್ಳಿ ಗ್ರಾಮ ದಲ್ಲಿ ಮಾಜಿ ಶಾಶಕ ದಿವಂಗತ ಎಸ್ ಚಿಕ್ಕಮಾಧು ರವರ ಅಣ್ಣ ಜವರ ನಾಯಕ ರವರ ಮನೆ ಹಾಗೂ ತಂಬಾಕು ಹದ ಮಾಡುವ ಬ್ಯಾರನ್ ಬಿದ್ದು ಹೋಗಿದೆ. ಮತ್ತೆ ಅದೇ ಗ್ರಾಮದ ಕೆಂಪನಾಯಕ ಬಸವರಾಜು ರವರ ಮನೆಯು ಬಿದ್ದು ಹೋಗಿದೆ. ಹುಣಸೂರಿನ ತಾಲೂಕು ರೈತರು ಮಳೆಯಿಂದ ಬೆಳೆಗಳೆಲ್ಲ ನಾಶವಾಗಿದೆ. ಜಾನುವಾರುಗಳು ಮೇವಿಲ್ಲದೆ ಸೊರಗುತ್ತಿವೆ ಒಟ್ಟಾರೆ ಮಳೆಯ ಆರ್ಭಟ ಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.

Previous Post
Next Post

0 Post a Comment: