ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜನೆ 


ಮಡಿಕೇರಿ ಆ.08(ಕರ್ನಾಟಕ ವಾರ್ತೆ):-ಕೊಡಗು ಜಿಲ್ಲೆಯಾದ್ಯಂತ ಕಳೆದ ಐದು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದ್ದು, ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆ ಸಂಪರ್ಕ ಕಡಿತಗೊಂಡಿರುತ್ತದೆ. ಗಾಳಿ ಮಳೆಯಿಂದ ಭೂಕುಸಿತ ಉಂಟಾಗಿ ಮನೆಗಳಿಗೆ ಹಾನಿಯಾಗಿದೆ. ನದಿ ತೊಡು ಮುಂತಾದವುಗಳು ತುಂಬಿ ಹರಿಯುತ್ತಿದ್ದು, ಸಮೀಪದ ಮನೆಗಳು ಜಲಾವೃತಗೊಂಡಿರುತ್ತದೆ. ಜಿಲ್ಲೆಯಲ್ಲಿ ಇನ್ನೂ 2 ದಿನಗಳ ಕಾಲ ಭಾರಿ ಮಳೆಯಾಗುವ ಸಂಭವಿರುವುದರಿಂದ ಮತ್ತು ಅಪಾಯದ ಅಂಚಿನಲ್ಲಿರುವ ಸಾರ್ವನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಮುಂದುವರೆದು ಪ್ರಕೃತಿ ವಿಕೋಪ ಸಂತ್ರಸ್ತರಾದವರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಸಂತ್ರಸ್ಥರಿಗೆ ಮೂಲಭೂತ ಸೌಕರ್ಯ ಉತ್ತಮ ರೀತಿಯಲ್ಲಿ ಒದಗಿಸುವ ಹಾಗೂ ನಿರ್ವಹಿಸುವ ನಿಟ್ಟಿನಲ್ಲಿ ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. 
ಮಡಿಕೇರಿ ತಾಲ್ಲೂಕು:-ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐಕೋಳ ರವಿಶಂಕರ್(9481772925),
 ಸಂತೋಷ್ ಪಾಟೀಲ್ (9611172799). 
ಮಡಿಕೇರಿಯ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧ್ಯ ಪಣೀಂದ್ರ (8722475697), 
ಸಣ್ಣರುದ್ರ (7019095463), 
ಮಡಿಕೇರಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಬಿ.ಯು.ಜಯಣ್ಣ (9535857212) ಶಿವಕುಮಾರ್(9535857026), 
ಮಡಿಕೇರಿ ಕೇಂದ್ರೀಯ ವಿದ್ಯಾಲಯ (ಹಳೆ ಕಟ್ಟಡ ಜಿಲ್ಲಾ ತರಬೇತಿ ಕೇಂದ್ರ ಕಟ್ಟಡ) ಸಿ.ಎನ್.ರಘು(9845684671), 
ಕೆ.ರವಿ(8310524060). 
ಸೋಮವಾರಪೇಟೆ ತಾಲ್ಲೂಕು:-ಮಾದಾಪುರ ಚೆನ್ನಮ್ಮ ಕಾಲೇಜು ಗಣೇಶ್(9483751306), 
ಪ್ರಹ್ಲಾದ್ (9481951460).
 ಕುಶಾಲನಗರ ವಾಲ್ಮೀಕಿ ಭವನಕ್ಕೆ ಮಲ್ಲೇಸ್ವಾಮಿ(9480984722). 
ನೆಲ್ಲಿಹುದಿಗೇರಿ ಬೆಟ್ಟದಕಾಡು ಅಂಗನವಾಡಿ ಕೇಂದ್ರಕ್ಕೆ ಕುಮಾರ್, ಸಂತೋಷ್ (9739196928).
 ವಿರಾಜಪೇಟೆ ತಾಲ್ಲೂಕು:- ಕರಡಿಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶಿವಮೂರ್ತಿ(9901036367, 8277929456). 
ಕರಡಿಗೋಡು ಬಸವೇಶ್ವರ ಸಮುದಾಯ ಭವನ ಶಿವರಾಜು (8904673536) 
ಕೊಂಡಂಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂ.ಎಸ್ ಮೋಹನ್ (9449183761).
 ಜಿ.ಎಂ.ಪಿ ಶಾಲೆ (ಬಿ.ಇ ಓಕಚೇರಿ ಹತ್ತಿರ) ಡೀನ (9448049020) ಇವರನ್ನು ನಿಯೋಜಿಸಲಾಗಿದೆ.
Previous Post
Next Post

0 Post a Comment: