ಕೊಡ್ಲಿಪೇಟೆ (TOC ಕೊಡಗು): SKSSF ಕೊಡ್ಲಿಪೇಟೆ ಶಾಖಾ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಸಮಸ್ತದ ಕೇಂದ್ರ ಮುಶಾವರ ಸದಸ್ಯರಾದ ಎಂ.ಎ ಖಾಸಿಂ ಉಸ್ತಾದ್,ಚೆರುವಾಳೂರ್ ಉಸ್ತಾದ, SKSSF ನಾಯಕರಾದ ಜೆಡಿಯಾರ್ ಇಬ್ರಾಹಿಂ ಫೈಝಿ ಅನುಸ್ಮರಣೆ ಹಾಗೂ ಪಾಣಕ್ಕಾಡ್ ಹೈದರ್ ಅಲಿ ಶಿಹಾಬ್ ತಂಙಳ್ ರವರ
----- ಜಾಹೀರಾತು -----
ಇಜಾಝಿಯತ್ ಪ್ರಕಾರ ನಡೆಸಿಕೊಂಡು ಬರುತ್ತಿರುವ ಮಾಸಿಕ ಮಜ್ಲಿಸುನ್ನೂರ್ನೂರ್ ಮಹಲ್ ನಲ್ಲಿ ನಡೆಯಿತು. ಪ್ರಸ್ತುತ ಸಭೆಯು SKSSF ಕೊಡ್ಲಿಪೇಟೆ ಶಾಖಾ ಗೌರವಾಧ್ಯಕ್ಷರಾದ ಮುಹಮ್ಮದ್ ಬಿ.ಐ ರವರ ಅಧ್ಯಕ್ಷತೆಯಲ್ಲಿ ಆರಂಭಗೊಂಡು, ಮಹಲ್ಲ್ ಸದರ್ ಉಸ್ತಾದ್ ಅಶ್ರಫ್ ಮಿಸ್ಬಾಹಿ ಪ್ರಾರ್ಥಿಸಿ, ಉದ್ಘಾಟಿಸಿದರು. ಶಾಖಾ ಅಧ್ಯಕ್ಷರಾದ ಝಹೀರ್ ನಿಝಾಮಿ ಸ್ವಾಗತಿಸಿದರು, ಮಹಲ್ಲ್ ಖತೀಬ್ ಹಾರಿಸ್ ಬಾಖವಿ ಮಜ್ಲಿಸುನ್ನೂರ್ ಹಾಗೂ ಸಮಸ್ತ ಉಲಮಾಗಳ ಅನುಸ್ಮರಣಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.



0 Post a Comment: