ಉಪಚುನಾವಣೆಗೆ `ಕೈ' ಪಾಳಯ ಭರ್ಜರಿ ಸಿದ್ಧತೆ : 17 ಕ್ಷೇತ್ರಗಳಿಗೆ ಸಂಭಾವನೀಯ ಅಭ್ಯರ್ಥಿಗಳ ಪಟ್ಟಿ ರೆಡಿ. 


ಬೆಂಗಳೂರು : ಅನರ್ಹ ಶಾಸಕರ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ಆರಂಭಿಸಿದ್ದು, ಎಲ್ಲ 17 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ. 17 ಕ್ಷೇತ್ರಗಳಲ್ಲಿ ಪಕ್ಷದಲ್ಲಿರುವ ಅಭ್ಯರ್ಥಿಗಳೇ ಅಲ್ಲದೇ, ಬಿಜೆಪಿಯಿಂದಲೂ ಕೆಲವರನ್ನು ಕರೆ ತರುವ ಪ್ರಯತ್ನ ಮುಂದುವರೆದಿದೆ. ಹೊಸಕೋಟೆಯಿಂದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ, ಹಿರೆಕೆರೂರಿನಿಂದ ಬಿ.ಜಿ.ಬಣಕಾರ್ ಪುತ್ರ ಯು.ಬಿ.ಬಣಕಾರ್, ಆರ್.ಆರ್. ನಗರಕ್ಕೆ ಹನುಮಂತರಾಯಪ್ಪ ಹೆಸರು ಚರ್ಚೆಯಲ್ಲಿದೆ. 17 ಕ್ಷೇತ್ರಗಳ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳು ಶಿವಾಜಿನಗರ- ಮನ್ಸೂರ್ ಅಲಿಖಾನ್, ರಿಜ್ವಾನ್ ಅರ್ಷಾದ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ವಾಜೀದ್ ಹುಣಸೂರು - ಹೆಚ್.ಪಿ. ಮಂಜುನಾಥ್, ವಿಜಯ್ ಶಂಕರ್ ರಾಣೆಬೆನ್ನೂರು-ಪ್ರಕಾಶ್ ಕೋಳಿವಾಡ ಮಸ್ಕಿ-ಮಾಜಿ ಸಂಸದ ಬಿ.ವಿ ನಾಯಕ, ರಾಜವೆಂಕಟಪ್ಪ ಗೋಕಾಕ್-ಲಖನ್ ಜಾರಕಿಹೊಳಿ ಕಾಗವಾಡ-ಪ್ರಕಾಶ್ ಹುಕ್ಕೇರಿ ಹಿರೇಕೆರೂರು-ಬಣಕಾರ್ ಚಿಕ್ಕಬಳ್ಳಾಪುರ-ಮಾಜಿ ಶಾಸಕ ಡಾ. ಸುಧಾಕರ್, ಜಗದೀಶ್ ರೆಡ್ಡಿ ಹೊಸಪೇಟೆ-ಮಾಜಿ ಶಾಸಕ ಹೆಚ್.ಆರ್. ಗವಿಯಪ್ಪ, ಸೂರ್ಯನಾರಾಯಣ ರೆಡ್ಡಿ, ಸಂತೋಷ್ ಲಾಡ್ ಯಲ್ಲಾಪುರ- ದೇಶಪಾಂಡೆ ಪುತ್ರ ಪ್ರಶಾಂತ್, ಭೀಮಣ್ಣ ನಾಯಕ್ ಹೊಸಕೋಟೆ-ಶಾಸಕ ಭೈರತಿ ಸುರೇಶ್ ಪತ್ನಿ ಪದ್ಮಾವತಿ, ಮಾಜಿ ಶಾಸಕ ಮಂಜುನಾಥ್ ಕೆ.ಆರ್.ಪುರ-ಸಿ.ಎಂ.ಧನಂಜಯ್, ರಾಜಣ್ಣ ಮಹಾಲಕ್ಷ್ಮೀ ಲೇಔಟ್- ಹೆಚ್.ಸಿ. ಬಾಲಕೃಷ್ಣ, ಶಿವರಾಜ್ ಆರ್.ಆರ್.ನಗರ-ಹನುಮಂತಪ್ಪ ಯಶವಂತಪುರ-ಎಂ.ರಾಜಕುಮಾರ್, ಜವರಾಯಿಗೌಡ ಕೆ.ಆರ್.ಪೇಟೆ-ಕೆ.ಬಿ.ಚಂದ್ರಶೇಖರ್ ಹುಣಸೂರು-ಹೆಚ್.ಪಿ. ಮಂಜುನಾಥ್,
Previous Post
Next Post

0 Post a Comment: