ಕುಂಞಿ ಅಹ್ಮದ್ ತಹಶೀಲ್ದಾರ್ ; ನಿಷ್ಕಳಂಕ, ನಿಸ್ವಾರ್ಥ ಆಡಳಿತಾಧಿಕಾರಿ


✍ಸ್ವಬಾಹ್ ಹಿಮಮಿ ಬೀಜಕೊಚ್ಚಿ
ಸುಳ್ಯ (TOC ನ್ಯೂಸ್ ದ.ಕ) ಸುಳ್ಯ, ಸಪ್ತ ಭಾಷೆಗಳ ಸಂಗಮ ಭೂಮಿ. ಕಾಸರಗೋಡು, ಮಂಗಳೂರು ಮತ್ತು ಕೊಡಗು ಹೆದ್ದಾರಿಗಳಲ್ಲಿ ಸಿಗುವ ಮುಖ್ಯ ಪಟ್ಟಣ. ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕಿನ ಪೈಕಿ ಕೊನೆಯ ತಾಲೂಕು. ಜಾತಿ-ಧರ್ಮ-ಪಥ-ಪಂಗಡಗಳು ಹಲವಾರಿದ್ದರೂ ಪರಸ್ಪರ ಪ್ರೀತಿ, ಸಂತೋಷ, ಸಹಬಾಳ್ವೆಗಳಿಗೆ ಹೆಸರುವಾಸಿಯಾದ ಊರು. ಕೆ.ಎ 21 ಅಂದರೆ ನಮ್ಮವರು. ಕಲ್ಸಿಕಟ್ಟೆ ಎಂಬ ಹೆಸರನ್ನು ಬದಲಾಯಿಸಿ ಸುಳ್ಯ ಎಂದು ನಾಮಕರಣ ಮಾಡಲಾಗಿತ್ತಂತೆ. ಮಸೀದಿ, ಮಂದಿರ, ಚರ್ಚ್ ಗಳೇ ಸುಳ್ಯದ ಸೊಬಗು. ತಾಲೂಕಿನ ಹೆಮ್ಮೆಯ ತಹಶೀಲ್ದಾರರಾಗಿದ್ದಾರೆ ಶ್ರೀ ಕುಂಞಿ ಅಹ್ಮದ್. ಕುಂಞಿ ಅಹ್ಮದ್ ರವರು ಕೊಡಗು ಜಿಲ್ಲೆಯ ವಿರಾಜಪೇಟೆಯವರು. ಕಳೆದ 6 ತಿಂಗಳ ಹಿಂದೆ ಸುಳ್ಯದ ತಹಶೀಲ್ದಾರರಾಗಿ ನೇಮಕಗೊಂಡು ಸಕ್ರಿಯ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಈವರೆಗೂ ಸುಳ್ಯ ಕಾಣದ ಅಪ್ರತಿಮ ನಿಷ್ಕಳಂಕ, ನಿಸ್ವಾರ್ಥ ಅಧಿಕಾರಿಯಾಗಿದ್ದಾರೆ ನಮ್ಮ ತಹಶೀಲ್ದಾರ್ ಎಂಬುದರಲ್ಲಿ ಎರಡು ಮಾತಿಲ್ಲ. Really, we feel much & more proud to be have such a TAHASHILDHAR. ತಾಲೂಕಿನ ಎಲ್ಲ ಅಧಿಕಾರಿ ವೃಂದದವರೊಂದಿಗೆ ಸಮಾನ ಮನಸ್ಸಿನೊಂದಿಗೆ ಅವರಿಗೆ ಮಾದರಿಯಾಗಿ ತನ್ನ ಅಧಿಕಾರಾವಧಿಯನ್ನು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಿಸದೇ ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಾತ್ಮ ಗಾಂಧೀಜಿಯವರಲ್ಲಿ ಭಾರತಕ್ಕೆ ಯಾವ ಆಡಳಿತ ಮಾದರಿ, ಶೈಲಿ ಪರಿಣಾಮಕಾರಿಯಾಗುತ್ತದೆ ಎಂದು ಕೇಳಿದಾಗ ಗಾಂಧೀಜಿ ನೀಡಿದ ರಿಪ್ಲೈ ಇಸ್ಲಾಮಿಕ್ ಖಿಲಾಫತ್'ನ ಎರಡನೇ ಖಲೀಫ ಉಮರ್ ಬಿನ್ ಖತ್ತಾಬ್ (ರ) ರವರ ಆಡಳಿತ ಎಂದಾಗಿತ್ತು. ಆ ರೋಲ್ ಮೋಡಲ್ ನಂತೆ ನಮ್ಮ ತಹಶೀಲ್ದಾರ್ ತಮ್ಮ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ. 
ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಸುಳ್ಯ.👈 ಇದು ತಹಶೀಲ್ದಾರ್ ರವರ ಮುಖ್ಯ ಅಜೆಂಡಾ. ಇದೀಗಲೇ ಸುಳ್ಯ ಪ್ಲಾಸ್ಟಿಕ್ ಮುಕ್ತ ತಾಲೂಕಿನತ್ತ ಹೆಜ್ಜೆ ಇಟ್ಟಿದೆ. ಅದರ 90 ಶೇಕಡ ಕಾರ್ಯರೂಪಗಳೆಲ್ಲವೂ ಫುಲ್ ಸಕ್ಸಸ್ ಆಗಿದೆ.
 ಬೆಳಕು ಎಂಬುದು ಬಡ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆ. ಬಡವರೊಂದಿಗೆ ಸಂಪೂರ್ಣವಾಗಿ ಬೆರೆತು ಅವರ ಎಲ್ಲ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ದೊರಕಿಸಿ ಕೊಡುವುದು. ಹೀಗೆ ಹತ್ತು ಹಲವಾರು ಸಮಾಜಮುಖಿ, ಸಾಂತ್ವನ ಕಾರ್ಯ ಯೋಜನೆಗಳು, ಕಾರ್ಯ ಚಟುವಟಿಕೆಗಳು. ಅಭಿವೃದ್ಧಿಯಿಂದ ಅಭಿವೃದ್ಧಿಯತ್ತ ಸಾಗುತ್ತಿದೆ ನಮ್ಮ ಸುಳ್ಯ. ಸುಳ್ಯದ ಅಭಿವೃದ್ಧಿಯ ಹರಿಕಾರ ಕುಂಞಿ ಅಹ್ಮದ್ ಸರ್ ರವರೆಂದರೆ ತಪ್ಪಾಗದು. ಯಾವುದೇ ರಾಜಕೀಯ ಅಥವಾ ಇನ್ನಿತರ ಪಾರ್ಟಿಗಳ ಹಿಂದೆ ದುಂಬಾಲು ಬೀಳದೆ ಎಲ್ಲರೊಂದಿಗೆ ಎಲ್ಲ ಪಾರ್ಟಿಯವರೊಂದಿಗೆ, ಎಲ್ಲ ಧರ್ಮದವರೊಂದಿಗೆ ಸಮಾನ ರೀತಿಯಲ್ಲಿ ವರ್ತಿಸುತ್ತಾ ಊರವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

 ನಿನ್ನೆ (ಸೆಪ್ಟಂಬರ್ 19) ಎಸ್ಸೆಸ್ಸೆಫ್ ನ ಧ್ವಜ ದಿನ. ಅದರ ಪ್ರಯುಕ್ತ ಡಾ. ಎಂ.ಬಿ ಸದಾಶಿವ ರವರ ಸಂದೀಪಾ ಸ್ಪೆಷಲ್ ಸ್ಕೂಲ್ ನಲ್ಲಿ ರೀಚ್ ಎಂಬ ಕಾರ್ಯಕ್ರಮ ಇಟ್ಟುಕೊಂಡಿದ್ದೆವು. ಕಾರ್ಯಕ್ರಮಕ್ಕೆ ತಹಶೀಲ್ದಾರ್ ರವರನ್ನು ಆಮಂತ್ರಿಸಲು ಹೋದಾಗ, "ಎಸ್ಸೆಸ್ಸೆಫ್ ನವರು ಏನು ಬೇಕಾದರೂ ಮಾಡಿ, ನೀವು ಒಳ್ಳೆಯದನ್ನೇ ಮಾಡುತ್ತೀರಾ, ನನ್ನ ಫುಲ್ ಸಪೋರ್ಟ್" ಎನ್ನುತ್ತಾ ನಮಗೆ ಸ್ಫೂರ್ತಿ ತುಂಬಿದರು. ಅಂದ ಹಾಗೆ ನಿನ್ನೆಯ ನಮ್ಮ ಕಾರ್ಯಕ್ರಮ ಉದ್ದೇಶಕ್ಕಿಂತಲೂ ಚೆನ್ನಾಗಿ ನಡೆದಿದೆ. ಎಂ.ಬಿ ರವರ ವಿಕಲಚೇತನ ಮಕ್ಕಳು, ಅವರನ್ನು ಕಂಡು, ಅವರ ಆ ಸಂಸ್ಥೆ, ಸಂಸ್ಥೆ ಮಕ್ಕಳನ್ನು ಕಂಡು, ಅವರ ಸೇವೆಯನ್ನು ಕಂಡು ತಹಶೀಲ್ದಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್ಸೆಸ್ಸೆಫ್ ಇಲ್ಲಿ ಕಾರ್ಯಕ್ರಮ ನಡೆಸಿದ್ದು ನಿಜಕ್ಕೂ ಗ್ರೇಟ್ ಎನ್ನುತ್ತಾ ಮತ್ತಷ್ಟು ಸ್ಫೂರ್ತಿ ನೀಡಿದರು. ಆ ಮಕ್ಕಳಿಗೆ ಸ್ವತಹ ತಂದಿದ್ದ ಚೊಕಲೇಟ್'ಗಳನ್ನು ನೀಡಿ ಕುಶಲೋಪರಿ ನಡೆಸಿ ತನ್ನ ಭಾಷಣದಲ್ಲಿ ಅವರ ಬಗ್ಗೆ ಮಾತನಾಡಿ ಕಣ್ಣೀರಿಟ್ಟರು. ರೀಚ್ನಲ್ಲಿ ತಹಶೀಲ್ದಾರ್, ಡಾ.ಎಂ.ಬಿ ಹಾಗೂ ಕರ್ನಾಟಕ ಎಸ್ಸೆಸ್ಸೆಫ್ ಸ್ಥಾಪಧ್ಯಕ್ಷರಾದ ಎ.ಬಿ ಹಸನುಲ್ ಫೈಝಿ ಉಸ್ತಾದ್ ರವರುಗಳನ್ನು ಅವರ ವಿಶಿಷ್ಟ ಸಾಧನೆ, ಸೇವಾ ಕಾರ್ಯಚಟುವಟಿಕೆಗಳಿಗಾಗಿ ಗೌರವ ಕಾಣಿಕೆ ನೀಡಿ ಸನ್ಮಾನಿಸಿದೆವು. DEVOLEPED SULYA, ನಮ್ಮ ತಹಶೀಲ್ದಾರ್ ರವರ ಕನಸು. ಆ ಕನಸನ್ನು ನನಸು ಮಾಡಲಿರುವ ಗುರಿಯುತ್ತ ನಾವು ರೀಚ್ ಆಗುತ್ತಿದ್ದೇವೆ. ಅದರ ಮುಂಚೂಣಿಯಲ್ಲಿ ನಮ್ಮ ತಹಶೀಲ್ದಾರರಿದ್ದಾರೆ. ತಹಶೀಲ್ದಾರ್ ಬಗ್ಗೆ ನಮ್ಮ ತಹಶೀಲ್ದಾರ್ ಎನ್ನುವಾಗ ಅಭಿಮಾನವೆನಿಸುತ್ತದೆ. ಕನಸನ್ನು ನನಸು ಮಾಡುವತ್ತ ನಾವಿಟ್ಟಿರುವ ಯಾತ್ರೆಯ ದಂಡ ನಾಯಕ ತಹಶೀಲ್ದಾರ್ ಶ್ರೀ ಯುತ ಕುಂಞಿ ಅಹ್ಮದ್ ರವರು. ಅಲ್ಲಾಹು ಅವರಿಗೆ ಆಫಿಯತ್ ನೊಂದಿಗೆ ಧೀರ್ಘಾಯುಸ್ಸು ನೀಡಿ ಅನುಗ್ರಹಿಸಲಿ, ಆಮೀನ್.
Previous Post
Next Post

0 Post a Comment: