ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF) ವತಿಯಿಂದ ಸ್ವಾತಂತ್ರ್ಯದ ಕಾವಲುಗಾರರಾಗಿ ಎಂಬ ಜನಜಾಗೃತಿ ಸಭೆ


ಗಲ್ಫ್ ನ್ಯೂಸ್ (TOC ) : QISF ಆಯೋಜಿಸಿದ್ದ ಕಾರ್ನರ್ ಮೀಟ್ ಕಾರ್ಯಕ್ರಮವು ಕತಾರ್ ನ 2 ಕಡೆ ಆಗಸ್ಟ್ 6 ರ ಶುಕ್ರವಾರದಂದು ಕತಾರ್ ನ ಮದೀನಾ ಖಲೀಫತ್ ಹಾಗೂ ನಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಕತಾರ್ ಇಂಡಿಯನ್ ಸೋಶಿಯಲ್ ಫೋರಂ (QISF) ನ ಬಗ್ಗೆ ಇಮ್ರಾನ್ ದೇರಳಕಟ್ಟೆ ಪ್ರಸ್ತಾವಿಕ ಭಾಷಣದೊಂದಿಗೆ QISF ನ ಕಾರ್ಯವೈಖರಿಯ ಬಗ್ಗೆ ಕಿರು ಪರಿಚಯ ನೀಡಿದರು. ಪ್ರಸಕ್ತ ಸನ್ನಿವೇಶದಲ್ಲಿ ನಡೆಯುತ್ತಿರುವ NRC ಎಂಬ ಕಾಯ್ದೆ, UAPA ಯಂತಹ ಕರಾಳ ಕಾನೂನು, ತ್ರಿವಳಿ ತಲಾಖ್ ಬಿಲ್ ಹಾಗೂ ಮುಸ್ಲಿಮ್ ಧಾರ್ಮಿಕ ನೇತಾರರನ್ನು ಭಯೋತ್ಪಾದಕರೆಂಬಂತೆ ಚಿತ್ರಿಕರಿಸುವ ಷಡ್ಯಂತ್ರದ ಬಗ್ಗೆ ಜಾಗೃತರಾಗಬೇಕೆಂದು

 ವಿಚಾರವಾಗಿ ಜಲೀಲ್ ರವರು ಮದೀನ ಖಲೀಫತ್ ನಲ್ಲಿ ನಡೆದ ಕಾರ್ನರ್ ಮೀಟ್ ನಲ್ಲಿ ಸವಿಸ್ತಾರವಾಗಿ ವಿವರಿಸಿದರು. ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ದಿನದಿಂದ, ದಲಿತರ ಮತ್ತು ಅಲ್ಪಸಂಖ್ಯಾಂತರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆ ಹಾಗೂ ಕರಾಳ ಕಾನೂನಿನ ವಿರುದ್ದ ಜಾತ್ಯತೀತ ಮನೋಭಾವನೆ ಹೊಂದಿದ ಸರ್ವರು ಹೋರಾಟದ ರಂಗಕ್ಕೆ ಇಳಿಯಬೇಕೆಂದು ಕರೆ ನೀಡಿದರು. ಮಾತ್ರವಲ್ಲ ಜೈ ಶ್ರೀರಾಮ್ ಹಾಗೂ ಜೈ ಹನುಮಾನ್ ಹೆಸರಿನಲ್ಲಿ ಹಾಗೂ‌ ಗೋಹತ್ಯೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹತ್ಯೆಯ ವಿರುದ್ದ, ಆತ್ಮ ರಕ್ಷಣೆಗಾಗಿ ಪ್ರತಿರೋಧ ಒಡ್ಡುವುದು ಕಾಲದ ಬೇಡಿಕೆಯಾಗಿದೆ ಎಂದು ನಲ್ಲಿ ಶಾಕೀರ್ ಪುಂಜಾಲಕಟ್ಟೆಯವರು ಕತಾರ್ ನ ಲುಕ್ತಾ ದಲ್ಲಿ ನಡೆದ ಕಾರ್ನರ್ ಮೀಟ್ ಕಾರ್ಯಕ್ರಮದಲ್ಲಿ ಕರೆ ನೀಡಿದರು. ವಂದನಾರ್ಪಣೆಯ ಮೂಲಕ ಕಾರ್ಯಕ್ರಮವು ಮುಕ್ತಾಯಗೊಂಡಿತು. ಇಮ್ರಾನ್ ದೇರಳಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೀರಿಕ್ಷೆಗೂ ಮೀರಿದ ಸಾರ್ವಜನಿಕರು ಹಾಗೂ QISF ನ‌ ಕಾರ್ಯಕರ್ತರು ಭಾಗವಹಿಸಿದ್ದರು.
Previous Post
Next Post

0 Post a Comment: